ಸಿಂಧನೂರು: ಗಮನ ಸೆಳೆದ ಸಮುದಾಯ ತಂಡದ ‘ರಕ್ತ ವಿಲಾಪ’ ನಾಟಕ

Spread the love

ನಮ್ಮ ಸಿಂಧನೂರು, ಆಗಸ್ಟ್ 25
ನಗರದ ಟೌನ್‌ಹಾಲ್‌ನಲ್ಲಿ ಸಮುದಾಯ ಸಂಘಟನೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ನಾಟಕೋತ್ಸವದಲ್ಲಿ ಶನಿವಾರ ರಾತ್ರಿ ರಾಯಚೂರಿನ ಸಮುದಾಯ ತಂಡ ಅಭಿನಯಿಸಿದ ವಿಕ್ರಮ್ ವಿಸಾಜಿ ರಚಿಸಿದ ಕಾದಂಬರಿ ಆಧಾರಿತ ಪ್ರವೀಣ್‌ರೆಡ್ಡಿ ಗುಂಜಳ್ಳಿ ಅವರು ನಿರ್ದೇಶನದ ರಕ್ತ ವಿಲಾಪ ನಾಟಕ ರಂಗಾಸಕ್ತರ ಗಮನ ಸೆಳೆಯಿತು.

Namma Sindhanuru Click For Breaking & Local News

ಖ್ಯಾತ ಸಂಶೋಧಕ ಡಾ.ಎಂ.ಎಂ..ಕಲಬುರಗಿ ಅವರ ಜೀವನಾಧಾರಿತ ನಾಟಕವನ್ನು ಅತ್ಯಂತ ಮನೋಜ್ಞವಾಗಿ ಅಭಿನಯಿಸಿದ ರಾಯಚೂರಿನ ತಂಡಕ್ಕೆ ನೆರೆದ ಪ್ರೇಕ್ಷಕರು ಕರತಾಡನ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದರು. ಇದಕ್ಕೂ ಮುನ್ನ ನಾಟಕೋತ್ಸವವನ್ನು ಸಮುದಾಯ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮನೋಜ್ ವಾಮಂಜೂರು ಜಂಬೆ ಬಾರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಂಗ ಕಲಾವಿದರಾದ ವಿ.ಎನ್.ಅಕ್ಕಿ, ಎಸ್.ದೇವೇಂದ್ರಗೌಡ, ಶರಣಬಣ್ಣ ನಾಗಲಾಪುರ, ಹುಲುಗಪ್ಪ, ಸರಸ್ವತಿ ಪಾಟೀಲ್, ಶಾಂತಪ್ಪ ಚಿಂಚಿರಿಕಿ ಸೇರಿದಂತೆ ಇನ್ನಿತರರಿದ್ದರು.

Namma Sindhanuru Click For Breaking & Local News
Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *