ನಮ್ಮ ಸಿಂಧನೂರು, ಮಾರ್ಚ್ 11
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಮಾರ್ಚ್ 5ರಿಂದ ನೀರು ಹರಿಬಿಟ್ಟಿದ್ದು, ನ.54ನೇ ಉಪ ಕಾಲುವೆಯಿಂದ ಮಸ್ಕಿ ತಾಲೂಕಿನ ಗುಡದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸಮಕಲ್ ಗ್ರಾಮದ ಕುಡಿವ ನೀರಿನ ಕೆರೆ ತುಂಬಿಸುವ ಕಾರ್ಯ ಭರದಿಂದ ನಡೆದಿದೆ. ಉಪ ಕಾಲುವೆಗೆ ನೀರು ಹರಿಬಿಟ್ಟಾಗಿನಿಂದ ಕೆರೆ ತುಂಬಿಸಲು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮುಂದಾಗಿದ್ದು, 5 ಮೋಟರ್ಗಳ ಮೂಲಕ ನೀರೆತ್ತಿ ಕೆರೆ ತುಂಬಿಸಲಾಗುತ್ತಿದೆ. ಕಳೆದ ಹಲವು ದಿನಗಳಿಂದ ಕೆರೆಯಲ್ಲಿ ನೀರು ಖಾಲಿಯಾಗಿ ಗುಡದೂರು, ಹಸಮಕಲ್, ರಂಗಾಪುರ, ಗೋನಾಳ ಸೇರಿದಂತೆ ವಿವಿಧ ಕ್ಯಾಂಪ್ಗಳಿಂದ ನೀರು ಸರಬರಾಜು ಸ್ಥಗಿತಗೊಂಡಿತ್ತು. ಕಾಲುವೆಗೆ ನೀರು ಹರಿಸಿದ್ದರಿಂದ ಕೆರೆ ತುಂಬಿಸುವ ಕಾರ್ಯ ಚುರುಕು ಪಡೆದುಕೊಂಡಿದೆ.