ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 12, 2026
ಕಳೆದ ಹಲವು ದಿನಗಳಿಂದ ಬಸನಗೌಡ ಫೌಂಡೇಶನ್ ವತಿಯಿಂದ ಎಡದಂಡೆ ಮುಖ್ಯ ಕಾಲುವೆಯ ವ್ಯಾಪ್ತಿಯಲ್ಲಿ ಬರುವ 36ನೇ ಉಪಕಾಲುವೆ ವೆಂಕಟೇಶ್ವರ ಕ್ಯಾಂಪಿನಿಂದ-ಬೂದಿವಾಳ ಕ್ಯಾಂಪಿನವರೆಗೆ ನಡೆದ ಸ್ವಚ್ಛತಾ ಹಾಗೂ ಹೂಳೆತ್ತುವ ಕಾರ್ಯಕ್ಕೆ ಈ ಭಾಗದ ರೈತರು ಹಾಗೂ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

20 ಗ್ರಾಮಗಳ, 52 ಕೆರೆಗಳ ಜಲಮೂಲ
ಅಂದಾಜು 40 ಕಿ.ಮೀ ಉದ್ದದ 36ನೇ ವಿತರಣಾ ಕಾಲುವೆ 20ಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿಯ ಜಮೀನುಗಳಿಗೆ ನೀರಿನ ಸಂಪರ್ಕ ಕಲ್ಪಿಸುತ್ತದೆ; ಅಲ್ಲದೇ 52 ಕೆರೆಗಳಿಗೆ ನೀರಿನ ಪ್ರಮುಖ ಜಲಮೂಲವಾಗಿದೆ. ಈ ಕಾಲುವೆಯಲ್ಲಿ ತ್ಯಾಜ್ಯ ಹಾಗೂ ಹೂಳು ತುಂಬಿದ್ದರಿಂದ ನೀರು ಸರಾಗವಾಗಿ ಹರಿಯಲು ಸಮಸ್ಯೆಯಾಗಿತ್ತು.
ರೈತರಿಂದ ಸನ್ಮಾನ
ಆರ್ಕೆಡಿಸಿಸಿ ನಿರ್ದೇಶಕರು ಹಾಗೂ ಫೌಂಡೇಶನ್ನ ಸೋಮನಗೌಡ ಬಾದರ್ಲಿ ಅವರನ್ನು ಈ ಕಾಲುವೆ ವ್ಯಾಪ್ತಿಯ ರೈತರು ಹಾಗೂ ಗ್ರಾಮದ ಸಾರ್ವಜನಿಕರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಕುಡಿಯುವ ನೀರು ಹರಿಬಿಡುವ ಸಂದರ್ಭದಲ್ಲಿ ಕಾಲುವೆ ಸ್ವಚ್ಛಗೊಳಿಸಿ, ಹೂಳೆತ್ತಿರುವುದಕ್ಕೆ ಮೆಚ್ಚುವೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತರು, ಗ್ರಾಮಸ್ಥರು ಇನ್ನಿತರರು ಇದ್ದರು.

