ಫೆ.16 ರಂದು ಒಳಬಳ್ಳಾರಿ ಶ್ರೀ ಚನ್ನಬಸವ ಮಹಾಶಿವಯೋಗಿಗಳವರ ಜಾತ್ರೆ

Spread the love

ನಮ್ಮ ಸಿಂಧನೂರು, ಫೆಬ್ರವರಿ 10
ತಾಲೂಕಿನ ಒಳಬಳ್ಳಾರಿ ಗ್ರಾಮದಲ್ಲಿ ಶ್ರೀ ಚನ್ನ ಬಸವ ಮಹಾ ಶಿವಯೋಗಿಗಳ 41 ನೇ ಜಾತ್ರಾ ಮಹೋತ್ಸವ ಇದೇ ಫೆ.16ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಭೇಡಿ ನೀಡಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ, ಧಾರ್ಮಿಕ ಸಭೆ, ನೀರಿನ ವ್ಯವಸ್ಥೆ, ವಾಹನಗಳಿಗೆ ಪಾರ್ಕಿಂಗ್ ಕುರಿತು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ತಹಸೀಲ್ದಾರ್‌ ಅರುಣ್ ಕುಮಾರ್ ದೇಸಾಯಿ, ಇಒ ಚಂದ್ರಶೇಖರ, ಬಾದರ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿಲೀಪ್ ಬಿಸ್ವಾಸ್, ಒಳಬಳ್ಳಾರಿ ಗ್ರಾಮ ಪಂಚಾಯಿತಿ ಪಿಡಿಒ ಸರಸ್ವತಿ, ಗ್ರಾಮೀಣ ಪಿಎಸ್‌ಐ ಮಹಮ್ಮದ್ ಇರ್ಷಾದ್, ಎಇಇ ಗಳಾದ ಶಿವಪ್ಪ, ಶಿವಪ್ಪ ಐಹೋಳೆ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *