Spread the love

ನಮ್ಮ ಸಿಂಧನೂರು, ಜೂನ್ 28
ತಾಲೂಕಿನ ಬಾದರ್ಲಿ ಗ್ರಾಮದ ವಿನೋದ ಕುಮಾರ್ ಅವರು ಮಂಡಿಸಿದ “ಕನ್ನಡದಲ್ಲಿ ವ್ಯಕ್ತಿವಿಶಿಷ್ಟವಾದ ತೇಜಸ್ವಿ ಅವರ ಕಥನ” ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯ ಹಂಪಿ ಪಿಎಚ್.ಡಿ ಪದವಿ ನೀಡಿದೆ. ಇದೇ ವಿವಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಎಂ.ಮಲ್ಲಿಕಾರ್ಜುನಗೌಡ ವಣೆನೂರು ಅವರ ಮಾರ್ಗದರ್ಶನದಲ್ಲಿ ವಿನೋದ್ ಕುಮಾರ್ ಅವರು ಮಹಾಪ್ರಬಂಧ ಮಂಡಿಸಿದ್ದರು. ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


Spread the love

Leave a Reply

Your email address will not be published. Required fields are marked *