ಸಿಂಧನೂರು: ರಾತ್ರೋ ರಾತ್ರಿ ಬ್ಯಾನರ್, ಬಂಟಿಗ್ಸ್ ಎತ್ತಂಗಡಿ !

Spread the love

ನಮ್ಮ ಸಿಂಧನೂರು, ಜುಲೈ 23
ನಗರದ ಗಾಂಧಿ ಸರ್ಕಲ್‌ನಲ್ಲಿ ಸೋಮವಾರ ಮಧ್ಯಾಹ್ನ ಕಬ್ಬಿಣದ ಕಟೌಟ್ ಬಿದ್ದು, ಹಲವರು ಗಾಯಗೊಂಡು, ಕಾರು, ಬೈಕ್ ಜಖಂಗೊಂಡ ಪ್ರಕರಣ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆ ವಿವಿಧ ಮಾರ್ಗದ ರಸ್ತೆಗಳಲ್ಲಿ ಹಾಕಿದ್ದ ಬ್ಯಾನರ್, ಬಂಟಿಗ್ಸ್‌ ಗಳು ರಾತ್ರೋ ರಾತ್ರಿ ಮಾಯವಾಗಿವೆ ! ಕಬ್ಬಿಣದ ಕಟೌಟ್ ಬಿದ್ದು ವೀರಾಪುರ ಗ್ರಾಮದ ಅಂಬಮ್ಮ, ಆಕೆಯ ಪತಿ ಯಮನಪ್ಪ ಹಾಗೂ ಬೂದಿವಾಳಕ್ಯಾಂಪ್‌ನ ಚಿಟ್ಟಿಬಾಬು ಅವರು ಗಾಯಗೊಂಡಿದ್ದರು. ಅಲ್ಲದೇ ಬಸವರಾಜ ಬಡಿಗೇರ ಎಂಬುವವರ ಕಾರು ಜಖಂಗೊಂಡಿತ್ತು. “ನೂತನ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರನ್ನು ಸ್ವಾಗತ ಕೋರುವ ಬ್ಯಾನರ್, ಬಂಟಿಗ್ಸ್, ಪ್ಲೆಕ್ಸ್ ಹಾಗೂ ಕಟೌಟ್ ಹಾಕಲು ಅವರ ಬೆಂಬಲಿಗರು ಅರ್ಜಿ ಮಾತ್ರ ಸಲ್ಲಿಸಿದ್ದಾರೆ. ಅದಕ್ಕೆ ಹಣ ಪಾವತಿಸಿ ನಗರಸಭೆಯಿಂದ ಅನುಮತಿ ಪಡೆದಿಕೊಂಡಿಲ್ಲ” ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಅವರು ಮಾಧ್ಯಮಗಳ ಮುಂದೆ ಖಚಿತಪಡಿಸಿದ್ದು, ಈ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ಬ್ಯಾನರ್, ಬಂಟಿಗ್ಸ್ಗಳನ್ನು ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ.

Namma Sindhanuru Click For Breaking & Local News

Spread the love
ಟ್ಯಾಗ್‌ಗಳು:

Leave a Reply

Your email address will not be published. Required fields are marked *