ಸಿಂಧನೂರು: ಜುಲೈ 8 ರಂದು ಹುತಾತ್ಮ ಯೋಧರ ಸ್ಮರಣೆ ನಿಮಿತ್ತ ಕ್ಯಾಂಡಲ್ ಮಾರ್ಚ್

Spread the love

ನಮ್ಮ ಸಿಂಧನೂರು, ಜುಲೈ 5
ಲಡಾಕ್ ಮತ್ತು ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ಹುತಾತ್ಮರಾದ ಸೇನಾ ಯೋಧರ ಸ್ಮರಣೆ ನಿಮಿತ್ತ ಜೈ ಜವಾನ್ ಜೈ ಕಿಸಾನ್ ಜನಪರ ಜಾಗೃತ ಸೇವಾ ಸಮಿತಿ (ರಿ) ವತಿಯಿಂದ ದಿನಾಂಕ: 8-7-2024 ರಂದು ಕ್ಯಾಂಡಲ್ ಮಾರ್ಚ್ ಹಮ್ಮಿಕೊಳ್ಳಲಾಗಿದೆ ಎಂದು ಸೇವಾ ಸಮಿತಿಯ ತಾಲೂಕು ಅಧ್ಯಕ್ಷ ಪ್ರಕಾಶ ಗೋನವಾರ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಅಂದು ಸಾಯಂಕಾಲ 5.30ಕ್ಕೆ ನಗರದ ಎಪಿಎಂಸಿಯ ಗಣೇಶ್ ದೇವಸ್ಥಾನದಿಂದ ಗಾಂಧಿ ಸರ್ಕಲ್‌ವರೆಗೆ ಕ್ಯಾಂಡಲ್ ಮಾರ್ಚ್ ನಡೆಸಿ, ತದನಂತರ ಗಾಂಧಿ ಪ್ರತಿಮೆ ಬಳಿ ಹುತಾತ್ಮ ಯೋಧರ ಭಾವಚಿತ್ರಗಳಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *