ಸಿಂಧನೂರು : ಅವಘಡಕ್ಕೆ ಕಾದು ನಿಂತ ಡಿವೈಡರ್ ವಿದ್ಯುತ್ ಕಂಬ !

Spread the love

ನಮ್ಮ ಸಿಂಧನೂರು, ಜೂನ್ 10
ನಗರದ ರಾಯಚೂರು ಮಾರ್ಗದ ಮುಖ್ಯ ರಸ್ತೆಯಲ್ಲಿ ಎಚ್.ಕೆ.ಜಿ.ಎನ್.ಆಟೋ ವರ್ಕ್ಸ್ ಎದುರುಗಡೆ ಇರುವ ಡಿವೈಡರ್‌ಗೆ ಮೇವಿನ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ, ವಿದ್ಯುತ್ ಕಂಬ ಜಖಂಗೊಂಡಿತ್ತು. ಅದನ್ನು ಸರಿಪಡಿಸದೇ ಹಾಗೆಯೇ ಬಿಟ್ಟಿದ್ದು, ಅವಘಡಕ್ಕೆ ಆಹ್ವಾನ ನೀಡಿದಂತಾಗಿದೆ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.
ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ಬಾಗಿದ್ದು, ವಾಹನ ಸವಾರರು, ಪಾದಚಾರಿಗಳು ರೋಡ್ ಕ್ರಾಸ್ ಮಾಡಲು ಆತಂಕ ಎದುರಿಸುತ್ತಿದ್ದಾರೆ. ಸಿಂಧನೂರು ಬಸ್ ನಿಲ್ದಾಣದಿಂದ ರಾಯಚೂರು ಮಾರ್ಗದ ಕಡೆ ವಾಹನ ಚಲಾಯಿಸುವಾಗ ರಸ್ತೆಗೆ ಬಾಗಿದ ವಿದ್ಯುತ್ ಕಂಬ ಒಂದು ವೇಳೆ ವಾಹನಗಳಿಗೆ ತಾಕಿದರೆ ಅಪಘಾತ ಕಟ್ಟಿಟ್ಟಬುತ್ತಿ. ಕೂಡಲೇ ಈ ಕಂಬವನ್ನು ನಗರಸಭೆ ಆಡಳಿತ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಹಾಗೂ ವಾಹನ ಸವಾರರು ಒತ್ತಾಯಿಸಿದ್ದಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *