ಸಿಂಧನೂರು: ಬಿಜೆಪಿ ಅಭ್ಯರ್ಥಿ ಪರ ಕೆ.ವಿರೂಪಾಕ್ಷಪ್ಪ, ವೆಂಕಟರಾವ್ ನಾಡಗೌಡ ಭರ್ಜರಿ ಪ್ರಚಾರ

Spread the love

ನಮ್ಮ ಸಿಂಧನೂರು, ಮೇ 2
ಇನ್ನೇನು ಚುನಾವಣೆಗೆ 5 ದಿನ ಬಾಕಿ ಉಳಿದಿರುವ ಬೆನ್ನಲ್ಲೇ ತಾಲೂಕಿನ ಹಲವು ಗ್ರಾಮಗಳಲ್ಲಿ ಮಾಜಿ ಸಂಸದ ಬಿಜೆಪಿಯ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ಜೆಡಿಎಸ್‌ನ ವೆಂಕಟರಾವ್ ನಾಡಗೌಡ ಅವರು ಗುರುವಾರ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಪರ ಭರ್ಜರಿ ಪ್ರಚಾರ ನಡೆಸಿದರು. ತಾಲೂಕಿನ ಬೂದಿವಾಳ್‌ಕ್ಯಾಂಪ್, ಸೋಮಲಾಪುರ, ಸಾಲಗುಂದ, ರೌಡಕುಂದಾ, ರಾಮಾಕ್ಯಾಂಪ್, ಲಕ್ಷ್ಮಿಕ್ಯಾಂಪ್, ಬಂಗಾರಿಕ್ಯಾಂಪ್‌ನಲ್ಲಿ ಪ್ರಚಾರ ಕೈಗೊಂಡು ಸಾರ್ವಜನಿಕರಲ್ಲಿ ಮತಯಾಚನೆ ಮಾಡಿದರು. ಈ ವೇಳೆ ಕಾಡಾ ಮಾಜಿ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ, ನಯೋಪ್ರಾ ಮಾಜಿ ಅಧ್ಯಕ್ಷ ಮಧ್ವರಾಜ್ ಆಚಾರ್ಯ, ಬಿ.ಹರ್ಷ, ರಾಮಚಂದ್ರರಾವ್, ಪದ್ಮನಾಯ್ಡು, ಬಾಲಕೃಷ್ಣ, ವಂಶಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‌ ಬೆಂಬಲಿಗರು, ಕಾರ್ಯಕರ್ತರು ಇದ್ದರು.

Namma Sindhanuru Click For Breaking & Local News
Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *