ಹಸಮಕಲ್: ಮಹ್ಮದ್‌ ಖಾನ್‌ಸಾಹೇಬ್‌ ದರ್ಗಾ ಉರುಸು

Spread the love

ನಮ್ಮ ಸಿಂಧನೂರು, ಫೆಬ್ರವರಿ 6
ಮಸ್ಕಿ ತಾಲೂಕಿನ ಹಸಮಕಲ್‌ ಗ್ರಾಮದಲ್ಲಿ ಹಜರತ್‌ ಮಹ್ಮದ್‌ ಷರೀಫ್‌ ಖಾನ್‌ ಸಾಹೇಬ್‌ ದರ್ಗಾ ಉರುಸು ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಉರುಸು ನಿಮಿತ್ತ ಬೆಳಗ್ಗೆಯಿಂದಲೇ ನಾನಾ ಧಾರ್ಮಿಕ ವಿಧಿ-ವಿಧಾನಗಳು ಜರುಗಿದವು. ಸಂತೆಕೆಲ್ಲೂರಿನಿಂದ ಆಗಮಿಸಿದ ಗಂಧವನ್ನು ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಭಕ್ತಾದಿಗಳು ಮೆರವಣಿಗೆ ಮೂಲಕ ಖಾನ್‌ ಸಾಹೇಬರ ಕರ್ತೃ ಗದ್ದುಗೆ ತಂದು ಸಮರ್ಪಿಸಲಾಯಿತು. ಉರುಸು ನಿಮಿತ್ತ ಸೋಮವಾರ ಅಹೋರಾತ್ರಿ ದುರ್ಗಾದೇವಿ ಭಜನಾ ಮಂಡಳಿ ಸೇರಿದಂತೆ ಇನ್ನಿತರೆ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರ ಟ್ರಸ್ಟ್‌ (ರಿ) ವತಿಯಿಂದ ಸಾಂಸ್ಕೃತಿಕ ಸಂಭ್ರಮ 2024 ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿವಿಧ ಕಡೆಯಿಂದ ಬಂದಿದ್ದ ಕಲಾವಿದರು ಕಲೆಯನ್ನು ಪ್ರಸ್ತುತಪಡಿಸಿದರು.

Namma Sindhanuru Click For Breaking & Local News
Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *