ಕೊಪ್ಪಳ ಲೋಕಸಭೆ ಕ್ಷೇತ್ರ: ಕೆಆರ್‌ಎಸ್‌ ಪಾರ್ಟಿಯಿಂದ ನಿರುಪಾದಿ ಗೋಮರ್ಸಿ ನಾಮಪತ್ರ ಸಲ್ಲಿಕೆ

Spread the love

ನಮ್ಮ ಸಿಂಧನೂರು, ಏಪ್ರಿಲ್‌ 16
ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿಯಿಂದ ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಸಿಂಧನೂರು ತಾಲೂಕಿನ ಗೋಮರ್ಸಿಯ ನಿರುಪಾದಿ ಗೋಮರ್ಸಿಯವರು ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕೊಪ್ಪಳ ಉಸ್ತುವಾರಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣಾ ವಿವಿ, ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಚ್‌.ಗೊಡಚಳ್ಳಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾವನಾ ಶಾಸ್ತ್ರಿ, ಕೊಪ್ಪಳ ಜಿಲ್ಲಾ ಕಾರ್ಯದರ್ಶಿಗಳಾದ ಗಣೇಶ್ ಶಿಂಧೆ, ಕನಕಪ್ಪ ಉಡೆಜಾಲಿ, ಪಕ್ಷದ ಮುಖಂಡರಾದ ಶ್ರೀಕಾಂತ್ ಕಡಬೂರ್, ಬಸವ ಪ್ರಭು ಮಹೆಬೂಬ್, ಶರಣಪ್ಪ , ಮಹಾಂತೇಶ್, ಶರಣಪ್ಪ ಭೇರ್ಗಿ, ಗಣೇಶ್ ಕುಮಾರ್, ದೇವಣ್ಣ ಪುಲದಿನ್ನಿ, ಕೃಷ್ಣ , ವಿಶ್ವನಾಥ್ ನಾಯ್ಡು ಮತ್ತಿತರು ಇದ್ದರು.


Spread the love

Leave a Reply

Your email address will not be published. Required fields are marked *