ಕೊಪ್ಪಳ ಎಂಪಿ ಕ್ಷೇತ್ರ: ಹೈಕಮಾಂಡ್ ಸೂಚನೆ, ಅರವಿಂದ್ ಬೆಲ್ಲದರಿಂದ ಕರಡಿ ಸಂಗಣ್ಣ ಮನವೊಲಿಕೆಗೆ ಯತ್ನ ?

Spread the love

(ಪೊಲಿಟಿಕಲ್‌ ನ್ಯೂಸ್‌: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮಾರ್ಚ್ 23
ಟಿಕೆಟ್ ಕೈತಪ್ಪಿರುವ ಕಾರಣ ಮುನಿಸಿಕೊಂಡಿರುವ ಹಾಲಿ ಸಂಸದ ಸಂಗಣ್ಣ ಕರಡಿ ಅವರನ್ನು ಮನವೊಲಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದ್ದು, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ ಸೇರಿದಂತೆ ಇನ್ನಿತರರನ್ನು ಕಳಿಸಿದೆ.ಶುಕ್ರವಾರ ಸಂಸದ ಸಂಗಣ್ಣ ಕರಡಿ ಅವರನ್ನು ಭೇಟಿ ಮಾಡಿದ ಅರವಿಂದ್ ಬೆಲ್ಲದ್ ಅವರು ಕೆಲವೊತ್ತು ಚರ್ಚಿಸಿ, ಸುದ್ದಿಗೋಷ್ಠಿ ನಡೆಸಿದ್ದಾರೆ. “ಹೈಕಮಾಂಡ್ ಡಾ.ಬಸವರಾಜ.ಎಸ್.ಕ್ಯಾವಟರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಹಾಗಾಗಿ ಅವರನ್ನು ಬೆಂಬಲಿಸುವಂತೆ ಕೋರಿರುವುದಾಗಿ” ಸಂಗಣ್ಣ ಕರಡಿ ಅವರಿಗೆ ಮನವೊಲಿಕೆ ಮಾಡಿದ್ದಾರೆಂದು ಹೇಳಲಾಗಿದೆ.

Namma Sindhanuru Click For Breaking & Local News

ಸಂಗಣ್ಣ ಕರಡಿ ಅವರ ಅಭಿಮಾನಿಗಳು ಕೊಪ್ಪಳದಲ್ಲಿ ಇದೇ ಮಾರ್ಚ್ 21ರಂದು ನಡೆಸಿದ ಸಭೆಯಲ್ಲಿ ಮಾತನಾಡಿದ್ದ ಹಾಲಿ ಸಂಸದರು ಹೈಕಮಾಂಡ್‌ಗೆ 4 ದಿನಗಳ ಗಡುವು ನೀಡಿದ್ದರು. ಅಷ್ಟರೊಳಗೆ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಸಭೆಯ ನಂತರ ಮಾಜಿ ಸಿಎಂಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರು ತಮ್ಮೊಂದಿಗೆ ಮಾತನಾಡಿರುವುದಾಗಿ ಸಂಸದರು ಬಹಿರಂಗಪಡಿಸಿದ್ದರು. ಇದಾದ ನಂತರ ಶುಕ್ರವಾರ ಅರವಿಂದ್ ಬೆಲ್ಲದ್ ಅವರು ಸಂಗಣ್ಣ ಕರಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಂತರ ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಅರವಿಂದ್ ಬೆಲ್ಲದ್ ಮತ್ತು ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೆಕೊಂಡಿದ್ದಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *