ಟಿಬಿ ಡ್ಯಾಂನಿಂದ 2,173 ಕ್ಯೂಸೆಕ್ ನೀರು ಎಡದಂಡೆ ಕಾಲುವೆಗೆ

Spread the love

ನಮ್ಮ ಸಿಂಧನೂರು, ಮಾರ್ಚ್ 7
ಬೇಸಿಗೆಯ ಬೇಗೆಯಿಂದಾಗಿ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕುಡಿವ ನೀರಿನ ಹಾಹಾಕಾರ ಉಂಟಾದ ಹಿನ್ನೆಲೆಯಲ್ಲಿ ಮಾರ್ಚ್ 5ನೇ ತಾರೀಖಿನಿಂದಲೇ ತುಂಗಭದ್ರಾ ಅಣೆಕಟ್ಟೆಯಿಂದ ಎಡದಂಡೆ ಮುಖ್ಯನಾಲೆಗೆ ನೀರು ಹರಿಬಿಡಲಾಗಿದೆ. ಮಾರ್ಚ್ 7 ರಂದು 2,174 ಕ್ಯೂಸೆಕ್ ನೀರು ಹರಿಬಿಡಲಾಗಿದೆ. ನಾಲೆಯ ನೀರು ರಾಯಚೂರಿನ ಗಣೇಕಲ್ ಜಲಾಶಯ ತಲುಪಿ, ಗಣೇಕಲ್ ಜಲಾಶಯ ತುಂಬಿದ ನಂತರ ಇತರೆ ಉಪಕಾಲುವೆ ವ್ಯಾಪ್ತಿಯಲ್ಲಿರುವ ಕುಡಿವ ನೀರಿನ ಕೆರೆಗಳಿಗೆ ಹರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *