ಸಿಂಧನೂರು ತಾಲೂಕಾ ನ್ಯಾಯಾಲಯದಲ್ಲಿ 75ನೇ ಗಣರಾಜ್ಯೋತ್ಸವ

Spread the love

ನಮ್ಮ ಸಿಂಧನೂರು, ಜನವರಿ 26
ನಗರದ ತಾಲೂಕು ನ್ಯಾಯಾಲಯದಲ್ಲಿ 75ನೇ ಗಣರಾಜ್ಯೋತ್ಸವದ ಅಂಗವಾಗಿ ಮೂರನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಶುಕ್ರವಾರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ದೀಪಾ ಗೋಪಾಲ ಮನೇರಕರ್ ಹಾಗೂ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅಚಪ್ಪ ದೊಡ್ಡಬಸವರಾಜ ಉಪಸ್ಥಿತರಿದ್ದರು.
ತಾಲೂಕು ವಕೀಲರ ಸಂಘದ ಕಾರ್ಯದರ್ಶಿಗಳಾದ ಶಿವಕುಮಾರ ಬೈರಿದೊರೆಗಳು, ಖಜಾಂಚಿಗಳಾದ ಕೆ.ಶರಣಬಸವ ಉಮಲೂಟಿ, ವಕೀಲರಾದ ಡಿ.ಎಸ್.ಕಲ್ಮಠ, ಎಂ.ಅಮರೇಗೌಡ, ಕೆ.ಭೀಮನಗೌಡ, ಕೆ.ವೀರನಗೌಡ, ಜಿ.ಎಸ್.ಆರ್.ಕೆ.ರೆಡ್ಡಿ, ಶ್ರೀಧರ ಕುಲಕರ್ಣಿ, ಜೆ.ರಾಯಪ್ಪ, ಶರಣೇಗೌಡ ಗದ್ರಟಗಿ ಹಾಗೂ ಇನ್ನಿತರ ಹಿರಿಯ ಮತ್ತು ಕಿರಿಯ ವಕೀಲರು ಹಾಜರಿದ್ದರು. ನ್ಯಾಯಾಲಯದ ಎಲ್ಲಾ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.


Spread the love

Leave a Reply

Your email address will not be published. Required fields are marked *