ಸಿಂಧನೂರು: ಬಿರುಸಿನ ಮಳೆಗೆ ತಗ್ಗು ಪ್ರದೇಶಗಳಲ್ಲಿ ನೀರು, ಮುರಿದು ಬಿದ್ದ ಗಿಡ

Spread the love

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜೂನ್ 3

ನಗರದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ನೆಲದಾರಿಗಳು ರಾಡಿ ಮಯವಾಗಿದ್ದರೆ, ಅಲ್ಲಲ್ಲಿ ಸಣ್ಣಪುಟ್ಟ ಗಿಡಗಳು ಮುರಿದುಬಿದ್ದಿವೆ. ಗಂಗಾನಗರ, ಮಹೆಬೂಬಿಯಾ ಕಾಲೋನಿ, ಇಂದಿರಾನಗರ, ಜನತಾ ಕಾಲೋನಿ ಸೇರಿದಂತೆ ಇನ್ನಿತರೆ ಕೆಲ ವಾರ್ಡ್ಗಳ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತಿದೆ. ಆದರ್ಶ ಕಾಲೋನಿಯ ಬಾಬಾ ರಾಮದೇವ ಮಂದಿರದ ಪಕ್ಕದ ರಸ್ತೆಯಲ್ಲಿ ಸಣ್ಣ ಬೇವಿನ ಗಿಡವೊಂದು ಮಳೆ-ಗಾಳಿ ರಭಸಕ್ಕೆ ಉರುಳಿಬಿದ್ದಿದೆ. ಆದರ್ಶ ಕಾಲೋನಿಯ ಹಲವು ಏರಿಯಾದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ, ರೈಲ್ವೆ ನಿಲ್ದಾಣಕ್ಕೆ ಸಾಗುವ ರಸ್ತೆ ಸಂಪೂರ್ಣ ಅಧ್ವಾನ ಸ್ಥಿತಿಗೆ ತಲುಪಿದೆ. ಇನ್ನು ಹಲವೆಡೆ ಚರಂಡಿ ನೀರು ರಸ್ತೆಗೆ ಹರಿದಿದೆ.

Namma Sindhanuru Click For Breaking & Local News
ಸಿಂಧನೂರಿನ ಆದರ್ಶ ಬಾಬಾ ರಾಮದೇವ ದೇವಸ್ಥಾನದ ಬಳಿಯಿರುವ ರಸ್ತೆಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆ-ಗಾಳಿಗೆ ಬೇವಿನ ಗಿಡವೊಂದು ಉರುಳಿಬಿದ್ದಿದೆ.
Namma Sindhanuru Click For Breaking & Local News
ಸಿಂಧನೂರಿನ ರೈಲ್ವೆ ನಿಲ್ದಾಣಕ್ಕೆ ಸಾಗುವ ದಾರಿಯಲ್ಲಿ ಮಳೆ ನೀರು ನಿಂತಿರುವುದು.

Spread the love

Leave a Reply

Your email address will not be published. Required fields are marked *