ಸಿಂಧನೂರು: ಮೇ 2ರಿಂದ ಸಾರ್ವಜನಿಕ ಕುರ್‌ಆನ್ ಪ್ರವಚನ

Spread the love

ಲೋಕಲ್‍ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮೇ 01

ನಗರದ ಆರ್‍.ಜಿ.ಎಂ.ಶಾಲಾ ಆವರಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‍ ಸಿಂಧನೂರು ವತಿಯಿಂದ ಮೇ 2, 3 ಹಾಗೂ 4 ರಂದು ಮೂರು ದಿನಗಳ ಕಾಲ ಸಂಜೆ 7.15 ರಿಂದ 9 ಗಂಟೆಯವರೆಗೆ ಸಾರ್ವಜನಿಕ ಕುರ್‌ಆನ್ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದು ಸಾರ್ವಜನಿಕ ಕುರ್‍ಆನ್‍ ಪ್ರವಚನ ಸಮಿತಿಯ ಅಧ್ಯಕ್ಷ  ಎಸ್‍.ಶರಣೇಗೌಡ, ಪ್ರಧಾನ ಸಂಚಾಲಕ ಮುಹಮ್ಮದ ಹುಸೇನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೇ 2ರಂದು ಉದ್ಘಾಟನಾ ಕಾ‍ರ್ಯಕ್ರಮ ನೆರವೇರಲಿದ್ದು, ನೈತಿಕ ಮೌಲ್ಯಗಳು ಮತ್ತು ಸಮಾಜ ವಿಷಯ ಕುರಿತು ಜಮಾಅತೆ ಇಸ್ಲಾಮಿ ಹಿಂದ್‍ನ ರಾಜ್ಯ ಕಾರ್ಯದರ್ಶಿ ಹಾಗೂ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ ಕುಂಞ ‍ಅವರು ಪ್ರವಚನ ನಡೆಸಿಕೊಡಲಿದ್ದಾರೆ. ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ರಂಭಾಪುರಿ ಖಾಸಾ ಶಾಖಾ ಮಠದ ಸೋಮನಾಥ ಶಿವಾಚಾರ್ಯರು, ವೆಂಕಟಗಿರಿಕ್ಯಾಂಪ್‍ನ ಸಿದ್ಧಾಶ್ರಮದ ಸಿದ್ಧರಾಮೇಶ್ವರ ಶರಣರು ಸಾನ್ನಿಧ್ಯ ವಹಿಸುವರು.


Spread the love

Leave a Reply

Your email address will not be published. Required fields are marked *