ಸಿಂಧನೂರು : ಟಿಬಿ ಡ್ಯಾಮಿನ 19ನೇ ಸ್ಟಾಪ್‌ಲಾಗ್ ಗೇಟ್ ಮರು ಜೋಡಣೆ ರೂವಾರಿ ಕನ್ನಯ್ಯ ನಾಯ್ಡುಗೆ ಸೆ.4ರಂದು ಸನ್ಮಾನ

Spread the love

ನಮ್ಮ ಸಿಂಧನೂರು, ಆಗಸ್ಟ್ 31
ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದ ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಸ್ಟಾಪ್‌ಲಾಗ್ ಗೇಟ್ ಅಳವಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಂಧ್ರಪ್ರದೇಶದ ನಿವೃತ್ತ ಚೀಫ್ ಎಂಜಿನಿಯರ್ ನಾಗನೇನಿ ಕನ್ನಯ್ಯ ನಾಯ್ಡು ಅವರಿಗೆ ನಗರದ ಸತ್ಯಾಗಾರ್ಡನ್‌ನಲ್ಲಿ ಸೆಪ್ಟೆಂಬರ್ 4 ಬುಧವಾರದಂದು ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆಕ್ಸ್‌ಫರ್ಡ್‌ ಸಮೂಹ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಸ್ವಾಗತ ಹಾಗೂ ಬೀಳ್ಕೊಡುಗೆ, ಘಟಿಕೋತ್ಸವ ಸಮಾರಂಭದಲ್ಲಿ, ಎನ್.ಶೇಷಯ್ಯ ಶ್ರೇಷ್ಠಿ ರವುಡಕುಂದಾ ಹಾಗೂ ಬೈಸಾನಿ ರಾಮಕೋಟಯ್ಯ ಕಂಪ್ಲಿ ಇವರ ಸ್ಮರಣಾರ್ಥವಾಗಿ, ಕನ್ನಯ್ಯ ನಾಯ್ಡು ಅವರಿಗೆ “ಮೇರು ಜೀವ 2024” ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೆಪ್ಟೆಂಬರ್ 4ರಂದು ಅಂದು ಬೆಳಿಗ್ಗೆ 9 ಗಂಟೆಗೆ ನಗರದ ರಾಧಾಕೃಷ್ಣ ಆಸ್ಪತ್ರೆ ಬಳಿಯಿರುವ ಆಕ್ಸ್‌ಫರ್ಡ್‌ ಕಾಲೇಜಿನಿಂದ ಸತ್ಯಾಗಾರ್ಡನ್‌ವರೆಗೆ ಕನ್ನಯ್ಯ ನಾಯ್ಡು ಅವರ ಮೆರವಣಿಗೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *