ಸಿಂಧನೂರು: ಡಿ.ಕೆ.ಶಿವಕುಮಾರ ಜನ್ಮದಿನ ಆಚರಣೆ, ಸರ್ಕಾರಿ ಆಸ್ಪತ್ರೆಯಲ್ಲಿ ಹಾಲು-ಹಣ್ಣು ವಿತರಣೆ

Spread the love

ನಮ್ಮ ಸಿಂಧನೂರು, ಮೇ 15
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ 62ನೇ ಜನ್ಮದಿನದ ನಿಮಿತ್ತ ತಾಲೂಕು ಕಾಂಗ್ರೆಸ್ ಸಮಿತಿ ಹಾಗೂ ಕಾಂಗ್ರೆಸ್ ಮುಖಂಡ ಸೋಮನಗೌಡ ಬಾದರ್ಲಿ ಅವರ ನೇತೃತ್ವದಲ್ಲಿ ಬುಧವಾರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಉಚಿತವಾಗಿ ಹಾಲು-ಹಣ್ಣು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ ಜವಳಿ, ಮುಖಂಡರಾದ ಶರಣಯ್ಯ ಕೋಟೆ, ಅಮರೇಶ ಗಿರಿಜಾಲಿ, ಹಬೀಬ್ ಖಾಜಿ, ಹನುಮಂತ, ಯುಸೂಫ್ ಎತ್ಮಾರಿ, ನಾನಿರೆಡ್ಡಿ, ಶಹಬಾಜ್, ಚನ್ನಬಸವ ಮುಳ್ಳೂರು, ಬಸವರಾಜ್ ಜಾಲವಾಡಗಿ, ವೀರೇಶ ಉಪ್ಪಲದೊಡ್ಡಿ, ಸಂತೋಷ್ ಹುಡಾ, ಬಸವರಾಜ ಹಾರಾಪುರ, ರಫಿ, ಜಾವೀದ್, ಸುದೀಪ್, ಆರೀಫ್, ಇಜಾಜ್ ಸೇರಿದಂತೆ ಇನ್ನಿತರರಿದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *