ಸಿಂಧನೂರು: ಎ.28ರಂದು ಸಿಎಂ ಸಿದ್ದರಾಮಯ್ಯ ಸಿಂಧನೂರಿಗೆ

Spread the love

ನಮ್ಮ ಸಿಂಧನೂರು, ಎ.27
ಕೊಪ್ಪಳ ಲೋಕಸಭಾ ಚುನಾವಣೆ ಇನ್ನೇನು 10 ದಿನ ಬಾಕಿ ಉಳಿದಿದ್ದು, ಬಹಿರಂಗ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಎಪ್ರಿಲ್‌ 28ರಂದು ಸಿಂಧನೂರಿಗೆ ಆಗಮಿಸಲಿದ್ದಾರೆ. ಸಿಂಧನೂರಿನ ಜೂನಿಯರ್‌ ಕಾಲೇಜು ಆವರಣದಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿರುವ ಬೃಹತ್‌ ಸಭೆಯಲ್ಲಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ್‌ ಪರ ಅವರು ಮತಯಾಚನೆ ಮಾಡಲಿದ್ದಾರೆ. ಸಿಂಧನೂರು, ಮಸ್ಕಿ ಹಾಗೂ ಸಿರುಗುಪ್ಪ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಭೆಯನ್ನು ಸಿಂಧನೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಎಪ್ರಿಲ್‌ 29ರಂದು ಕುಷ್ಟಗಿ ಪಟ್ಟಣ ಹಾಗೂ ಎಪ್ರಿಲ್‌ 30ರಂದು ಗಂಗಾವತಿ ನಗರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಜಾಧ್ವನಿ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಲಿದ್ದಾರೆ. ಪ್ರಚಾರ ಸಭೆ ಹಿನ್ನೆಲೆಯಲ್ಲಿ ಸಿದ್ಧತಾಕಾರ್ಯ ಭರದಿಂದ ಸಾಗಿದೆ.


Spread the love

Leave a Reply

Your email address will not be published. Required fields are marked *