ಸಿಂಧನೂರು : ಬಸವೇಶ್ವರ ಜಯಂತಿ ಪ್ರಯುಕ್ತ ಮೇ 5ರಿಂದ ಪ್ರವಚನ

Spread the love

ನಮ್ಮ ಸಿಂಧನೂರು, ಎಪ್ರಿಲ್ 25
ನಗರದ ಆರ್.ಜಿ.ಎಂ.ಶಾಲಾ ಮೈದಾನದಲ್ಲಿ ಬಸವೇಶ್ವರ ಜಯಂತಿಯ ಪ್ರಯುಕ್ತ ಮೇ 5 ರಿಂದ 10ನೇ ತಾರೀಖಿನವರೆಗೆ ಸಂಜೆ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ಕುರುಕುಂದಿ ತಿಳಿಸಿದ್ದಾರೆ. ವಿಜಯಪುರದ ತಿಕೋಟ ಗ್ರಾಮದ ಚನ್ನಮಲ್ಲಿಕಾರ್ಜುನ ಸ್ವಾಮಿ ಅವರು ಪ್ರವಚನ ನೀಡಲಿದ್ದು, ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ ನೇತೃತ್ವ ವಹಿಸುವರು. ಬಸವರಾಜ ಮೋರ್ತಿ, ಪುಟ್ಟರಾಜ ಮೋತಿ ಅವರಿಂದ ವಚನ ಸಂಗೀತ, ನಾರಾಯಣಪ್ಪ ಮಾಡಸಿರವಾರ, ಅಮರೇಗೌಡ ಮಾಲಿ ಪಾಟೀಲ್ ಅವರಿಂದ ತತ್ವಪದ ಗಾಯನ ನಡೆಯಲಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಜಿ.ಹಂಪಣ್ಣ, ಮುಖಂಡರಾದ ಶರಣಪ್ಪ ಟೆಂಗಿನಕಾಯಿ, ಶಾಂತಪ್ಪ ಚಿಂಚಿರಿಕಿ, ಗುಂಡಪ್ಪ ಬಳಿಗಾರ, ಬೀರಪ್ಪ ಶಂಭೋಜಿ, ಬಸವಲಿಂಗಪ್ಪ ಬಾದರ್ಲಿ, ಮಲ್ಲಿಕಾರ್ಜುನ ಹೊಗರನಾಳ, ಉತ್ಸವ ಸಮಿತಿ ಅಧ್ಯಕ್ಷ ವೆಂಕಟರೆಡ್ಡಿ ಇನ್ನಿತರರಿದ್ದರು.


Spread the love

Leave a Reply

Your email address will not be published. Required fields are marked *