ನಮ್ಮ ಸಿಂಧನೂರು, ಜುಲೈ 19
ನಗರದ ಗಂಗಾವತಿ ರಸ್ತೆಯ ಕರ್ನಾಟಕ ಬ್ಯಾಂಕ್ ಪಕ್ಕದಲ್ಲಿ ಸೈಯ್ಯದ್ ಜಾಫರ್ ಹುಸೇನ್ ಅವರ ಮಾಲೀಕತ್ವದ ಹೊಟೆಲ್ ರಾಯಲ್ ದರ್ಬಾರ್ ಅನ್ನು ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ ಅವರು ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಯುವಕರು ಹೊಸ ಹೊಸ ಉದ್ಯಮಗಳತ್ತ ಆಕರ್ಷಿತರಾಗಿ, ಯಶಸ್ವಿಯಾಗಿ ಕಟ್ಟುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ. ಆಹಾರೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿದ್ದು, ಶುಚಿ-ರಚಿ ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಉದ್ಯಮಿಯಾಗಿ ರೂಪುಗೊಳ್ಳಿ” ಎಂದು ಆಶಯ ವ್ಯಕ್ತಪಡಿಸಿದರು. ಈ ವೇಳೆ ಪ್ರಾಧಿಕಾರದ ಸದಸ್ಯ ಖಾಜಿಮಲಿಕ್ ವಕೀಲರು, ಕಾಂಗ್ರೆಸ್ ಯುವ ಮುಖಂಡ ಅಸ್ಲಂಪಾಷಾ, ಸೈಯ್ಯದ್ ಮಜಾರ್ ಹುಸೇನ್, ಇಮಾಮ್ ಹುಸೇನ್ ಎತ್ಮಾರಿ ಇನ್ನಿತರರು ಇದ್ದರು.

