ಸಿಂಧನೂರು: ಆದರ್ಶ ಕಾಲೋನಿಯಲ್ಲಿ ಚರಂಡಿ ತ್ಯಾಜ್ಯ ವಿಲೇವಾರಿಗೊಳಿಸಲು ಒತ್ತಾಯ

Spread the love

ನಮ್ಮ ಸಿಂಧನೂರು, ಮಾರ್ಚ್ 8
ನಗರದ ಆದರ್ಶ ಕಾಲೋನಿಯ ಓಣಿಗಳಲ್ಲಿ ಚರಂಡಿಯ ತ್ಯಾಜ್ಯವನ್ನು ತೆಗೆದು ರಸ್ತೆಬದಿ ಹಾಕಿದ್ದು, ಇದರಿಂದ ಸುತ್ತಲೂ ದುರ್ನಾತ ಉಂಟಾಗಿದೆ. ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ, ಹಾಗಾಗಿ ತಾಜ್ಯವನ್ನು ವಿಲೇವಾರಿ ಮಾಡಬೇಕು ಎಂದು ಕಾಲೋನಿಯ ನಿವಾಸಿಗಳು ಆಗ್ರಹಿಸಿದ್ದಾರೆ.
ತ್ಯಾಜ್ಯವನ್ನು ಚರಂಡಿಯಿAದ ತೆಗೆದ ನಂತರ ವಿಲೇವಾರಿ ವಾಹನಗಳಲ್ಲಿ ಸಾಗಿಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ತ್ಯಾಜ್ಯವನ್ನು ತೆಗೆದ ನಂತರ ಎರಡ್ಮೂರು ದಿನ ಹಾಗೆಯೇ ಬಿಡುವುದರಿಂದ ದುರ್ನಾತ ಅಷ್ಟೇ ಅಲ್ಲದೇ ಸೊಳ್ಳೆ ಹಾವಳಿ ಹೆಚ್ಚುತ್ತದೆ. ಇದರಿಂದ ಸುತ್ತಮುತ್ತಲಿನ ಮನೆಗಳವರು ಕಿರಿ ಕಿರಿ ಅನುಭವಿಸುವಂತಾಗಿದೆ. ಕೂಡಲೇ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಲೋನಿ ನಿವಾಸಿಗಳು ನಗರಸಭೆ ಪೌರಾಯುಕ್ತರನ್ನು ಒತ್ತಾಯಿಸಿದ್ದಾರೆ.


Spread the love

Leave a Reply

Your email address will not be published. Required fields are marked *