ಸಿಂಧನೂರು: ಶಿವರಾತ್ರಿ ಪ್ರಯುಕ್ತ ಮಾ.8ರಂದು ಸಂಗೀತ ಕಾರ್ಯಕ್ರಮ

Spread the love

ನಮ್ಮ ಸಿಂಧನೂರು, ಮಾರ್ಚ್ 8
ನಗರದ ಬ್ರಾಹ್ಮಣರ ಓಣಿಯ ಶ್ರೀರಾಮಂದಿರದಲ್ಲಿ ಶಿವರಾತ್ರಿಯ ಪ್ರಯುಕ್ತ ಸಂಸ್ಕಾರ ಭಾರತಿ ವತಿಯಿಂದ ಬ್ರಾಹ್ಮಣ ಸಮುದಾಯದ ಮಾಜಿ ಅಧ್ಯಕ್ಷ ದಿ.ರಾಮರಾವ್ ಕುಲಕರ್ಣಿ ಹಾಗೂ ರಂಗ ಕಲಾವಿದ ಹುಸೇನಪ್ಪ ಇವರ ಸ್ಮರಣಾರ್ಥ ಮಾರ್ಚ್ 8ರಂದು ಸಂಜೆ 5 ಗಂಟೆಗೆ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬ್ರಾಹ್ಮಣ ಸಮುದಾಯದ ಅಧ್ಯಕ್ಷ ಪ್ರಹ್ಲಾದ್ ರಾವ್ ಕುಲಕರ್ಣಿ ಹಾಗೂ ಕಾರ್ಯದರ್ಶಿ ಹನುಮಂತಪ್ಪ ಮಸ್ಕಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕಿಷನ್‌ರಾವ್ ಕುಲಕರ್ಣಿ (ಸಮಾಜಸೇವೆ), ವೆಂಕಟರಾವ್ ಶೇಷಗಿರಿರಾವ್ ಚೆನ್ನಳ್ಳಿ (ಸಂಗೀತ), ಪ್ರಲ್ಹಾದ್ ಶ್ಯಾಮಚಾರ್ ಕೆಂಗಲ್ (ಸೇವಾತತ್ವರತೆ), ಶರಣಯ್ಯಸ್ವಾಮಿ (ಸಂಗೀತ), ವಿಜಯಕುಮಾರ.ಪಿ.ಬದಿ (ಸಂಗೀತ) ಅವರನ್ನು ಸನ್ಮಾನಿಸಲಾಗುವುದು. ಅಂದು ವರದೇಂದ್ರ ಗಂಗಾಖೇಡ್, ಸುನಂದಾ ಸಾಲವಾಡಗಿ, ವಿಜಯಕುಮಾರ್ ಹಿರೇಮಠ, ವಿರಾಟ್.ಆರ್.ಬದಿ, ಹರಿಪ್ರಿಯಾ.ವಿ.ಉಪ್ಪಳ, ಮಹಾಂತಮ್ಮ.ಎಸ್.ಹಿರೇಮಠ, ಮಹಾಂತಯ್ಯಸ್ವಾಮಿ ಗೋನವಾರ, ವಿಜಯಕುಮಾರ.ಬದಿ. ಇವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *