ಪತ್ನಿ ಕೊಲೆ, ನೇಣುಬಿಗಿದುಕೊಂಡು ಪತಿ ಆತ್ಮಹತ್ಯೆಗೆ ಶರಣು, ಘಟನಾ ಸ್ಥಳಕ್ಕೆ ಎಸ್ಪಿ ಭೇಟಿ

Spread the love

ನಮ್ಮ ಸಿಂಧನೂರು, ಏಪ್ರಿಲ್‌ 20
ಪತ್ನಿಯನ್ನು ಕೊಲೆ ಮಾಡಿ, ತದನಂತರ ನೇಣು ಬಿಗಿದುಕೊಂಡು ಪತಿ ಮೃತಪಟ್ಟ ಘಟನೆ ತಾಲೂಕಿನ ದಿದ್ದಿಗಿ ಗ್ರಾಮದಲ್ಲಿ ಗುರುವಾರ ಸಂಜೆ ವರದಿಯಾಗಿದೆ. ಸವಿತಾ (20) ಕೊಲೆಗೀಡಾದ ಮಹಿಳೆ. ರಾಯಚೂರು ತಾಲೂಕಿನ ಯಲಮಂಚಾಲಿ ಗ್ರಾಮದ ಸವಿತಾ ಎಂಬ ಯುವತಿಯನ್ನು, ದಿದ್ದಿಗಿಯ ಭೀಮಪ್ಪ ಎಂಬಾತನಿಗೆ (22) ಕೆಲ ತಿಂಗಳುಗಳ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಗ್ರಾಮದ ಹೊಲವೊಂದರಲ್ಲಿ ಪತ್ನಿಯ ಮುಖ ಮತ್ತು ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಸಮೀಪದಲ್ಲಿಯೇ ಬನ್ನಿ ಮರಕ್ಕೆ ನೇಣುಬಿಗಿದುಕೊಂಡು ಭೀಮಪ್ಪ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ರಾಯಚೂರು ಜಿಲ್ಲಾ ಎಸ್ಪಿ ನಿಖಿಲ್.ಬಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶಿವಕುಮಾರ್‌.ಎಚ್‌, ಡಿವೈಎಸ್‌ಪಿ ಬಿ.ಎಸ್‌.ತಳವಾರ, ಭೇಟಿ ನೀಡಿ ಪರಿಶೀಲಿಸಿದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *