ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಏಪ್ರಿಲ್ 4
ಮಸ್ಕಿ-ಸಿಂಧನೂರು ರಾಷ್ಟ್ರೀಯ ಹೆದ್ದಾರಿ 150 ಎ ಮಾರ್ಗದಲ್ಲಿ ಮಲ್ಲಿಕಾರ್ಜುನ ಕ್ಯಾಂಪ್ ಬಳಿ ಲಾರಿಯೊಂದು ಭತ್ತದ ಗದ್ದೆಗೆ ಶುಕ್ರವಾರ ನಡೆದಿದೆ. ಮಸ್ಕಿ ಕಡೆಯಿಂದ ಸಿಂಧನೂರು ಕಡೆಗೆ ಲಾರಿ ಆಯತಪ್ಪಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಲಾರಿ ಭತ್ತದ ಗದ್ದೆಗೆ ಉರುಳಿರುವುದರಿಂದು ಸರಕು ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿವೆ. ಯಾವುದೇ ರೀತಿಯ ಸಾವು-ನೋವುಗಳಾದ ವರದಿಯಾಗಿಲ್ಲ.