ಸಿಂಧನೂರು: ಕೆಪಿಆರ್‌ಎಸ್‌ನಿಂದ ಬಿಜೆಪಿ, ಜೆಡಿಎಸ್ ತಿರಸ್ಕರಿಸಿ ಇಂಡಿಯಾ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಪ್ರಚಾರ ಅಭಿಯಾನ

Spread the love

ನಮ್ಮ ಸಿಂಧನೂರು, ಎಪ್ರಿಲ್ 23
“ಕೂಲಿಕಾರರು, ರೈತರು, ಕಾರ್ಮಿಕರ ಬದುಕನ್ನು ದೇಶವನ್ನು ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿರುವ ಬಿಜೆಪಿ ಮತ್ತು ಅವರ ಬೆಂಬಲಕ್ಕೆ ನಿಂತಿರುವ ಜೆ.ಡಿ.ಎಸ್.ಪಕ್ಷವನ್ನು ನಿರ್ಣಾಯಕವಾಗಿ ಸೋಲಿಸಬೇಕೆಂದು, ಇಂಡಿಯಾ ಒಕ್ಕೂಟದ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕೆಂಬ” ವಿಷಯವುಳ್ಳ ‘ವಿಚಾರ ಮಾಡಿ ಮತ ನೀಡಿ’ ಎಂಬ ಕರಪತ್ರವನ್ನು ಸಿಂಧನೂರು ತಾಲೂಕಿನ ಹಲವು ಗ್ರಾಮಗಳ ಮತದಾರರಿಗೆ ವಿತರಣೆ ಮಾಡುವ ಮೂಲಕ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ (ಎಐಎಡಬ್ಲ್ಯಯು) ಸಂಯೋಜಿತ) ಪ್ರಚಾರದಲ್ಲಿ ತೊಡಗಿದೆ.

Namma Sindhanuru Click For Breaking & Local News

ಕೆಪಿಆರ್‌ಎಸ್ ತಾಲೂಕು ಮುಖಂಡರಾದ ಅಪ್ಪಣ್ಣ ಕಾಂಬ್ಳೆ ಅವರ ನೇತೃತ್ವದಲ್ಲಿ ತಾಲೂಕಿನ ಸೋಮಲಾಪುರ, ಕೆಂಗಲ್, ದಡೇಸುಗೂರು ಗ್ರಾಮಗಳಲ್ಲಿ ಕೃಷಿ ಕೂಲಿಕಾರರ ಮನೆ ಮನೆಗೆ ಹಾಗೂ ಅವರು ಕಾರ್ಯನಿರ್ವಹಿಸುವ ಪ್ರದೇಶಗಳಿಗೆ ತೆರಳಿ ವಿಚಾರ ಮಾಡಿ ಮತ ನೀಡಿ ಕರಪತ್ರವನ್ನು ವಿತರಣೆ ಮಾಡುವ ಮೂಲಕ ಕೊಪ್ಪಳ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಪಣ್ಣ ಕಾಂಬ್ಳೆ, ವೀರೇಶ ಸೋಮಲಾಪುರ ಸೇರಿದಂತೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

Namma Sindhanuru Click For Breaking & Local News
Namma Sindhanuru Click For Breaking & Local News
Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *