ಗಂಗಾವತಿ: ಬಸಾಪಟ್ಟಣದಲ್ಲಿ ಬಿಜೆಪಿ ಬಿಗ್ ರೋಡ್ ಶೋ, ಬಲ ಪ್ರದರ್ಶನ

Spread the love

ನಮ್ಮ ಸಿಂಧನೂರು, ಎಪ್ರಿಲ್ 28
ಕೊಪ್ಪಳ ಲೋಕಸಭಾ ಕ್ಷೇತ್ರದ ಬಸಾಪಟ್ಟಣದಲ್ಲಿ ಬಿಜೆಪಿಯಿಂದ ಶನಿವಾರ ಬಿಗ್ ರೋಡ್ ಶೋ ನಡೆಸಿ ಬಹಿರಂಗ ಪ್ರಚಾರ ಸಭೆ ಹಮ್ಮಿಕೊಳ್ಳಲಾಯಿತು. ಪ್ರಚಾರ ಸಭೆಯನ್ನು ಉದ್ದೇಶಿಸಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಹಲವು ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸಿದರು. ಗಂಗಾವತಿ ಎಮ್ಮೆಲ್ಲೆ ಜನಾರ್ದನ ರೆಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ಈ ವೇಳೆ ಗಂಗಾವತಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಚನ್ನಪ್ಪ ಮಳಗಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ರಾಜ ನಾಯಕ್, ವಿರೂಪಾಕ್ಷಪ್ಪ ಸಿಂಗನಾಳ, ತಿಪ್ಪೇರುದ್ರಸ್ವಾಮಿ, ಸೂರಿಬಾಬು ನೆಕ್ಕುಂಟಿ, ಮನೋಹರ ಗೌಡ, ವೀರಭದ್ರಪ್ಪ ನಾಯಕ, ರುದ್ರೇಶ, ಶ್ರೀಧರ್ ಕೆಸರಟ್ಟಿ, ಚನ್ನವೀರ ಗೌಡ, ವಿರೂಪಾಕ್ಷಪ್ಪ, ಕಳಕನಗೌಡ, ವಿರೂಪಾಕ್ಷಪ್ಪ ಬಾರಿಕೇರಿ ಸೇರಿದಂತೆ ಇನ್ನಿತರರ ಮುಖಂಡರು ಇದ್ದರು.

Namma Sindhanuru Click For Breaking & Local News
Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *