ಸಿಂಧನೂರು: ನೇಣು ಬಿಗಿದ ಸ್ಥಿತಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿ ಶವ ಪತ್ತೆ !

Spread the love

ನಮ್ಮ ಸಿಂಧನೂರು, ಫೆಬ್ರವರಿ 16
ನಗರದ ಬಿ.ಎಸ್.ಎನ್.ಎಲ್ ಕಚೇರಿ ಎದುರುಗಡೆ ಇರುವ ಅಂಬೇಡ್ಕರ್ ಮೆಟ್ರಿಕ್ ನಂತರದ ಹಾಸ್ಟೆಲ್‌ನ ಶೌಚಗೃಹದಲ್ಲಿ ಗುರುವಾರ ಸಂಜೆ ವಿದ್ಯಾರ್ಥಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಗುಂಜಳ್ಳಿ ಗ್ರಾಮದ ಹಿರೇಹುಸೇನಪ್ಪ ದೊಡ್ಡ ಖಾಸೀಂಮಪ್ಪ (18) ಎಂಬುವ ವಿದ್ಯಾರ್ಥಿಯೇ ಅನುಮಾನಾಸ್ಪದವಾಗಿ ಮೃತಪಟ್ಟವರು. ಮಧ್ಯಾಹ್ನ 4 ಗಂಟೆ ಸುಮಾರು ವಿದ್ಯಾರ್ಥಿಯ ಸಂಬಂಧಿಯೊಬ್ಬರು ಜಾತ್ರೆಗೆ ವಿದ್ಯಾರ್ಥಿಯನ್ನು ಕರೆಯಲು ಹಾಸ್ಟೆಲ್‌ಗೆ ಬಂದಿದ್ದಾರೆ. ಆ ಸಮಯದಲ್ಲಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಇಲ್ಲದಿರುವುದನ್ನು ಕಂಡು ವಾಪಸ್ ಹೋಗಿದ್ದಾರೆ. ತದನಂತರ ಎಲ್ಲಾ ಕಡೆ ವಿಚಾರಿಸಿದಾಗ ಎಲ್ಲೂ ಪತ್ತೆಯಾಗದೇ ಇದ್ದಾಗ, ರಾತ್ರಿ 8 ಗಂಟೆ ಸುಮಾರು ಸ್ಥಳೀಯ ಪೊಲೀಸ್ ಠಾಣೆಗೆ ವಿದ್ಯಾರ್ಥಿ ಕಾಣೆಯಾದ ಬಗ್ಗೆ ದೂರು ನೀಡಲು ನಿರ್ಧರಿಸಿದ್ದಾರೆ. ಅಷ್ಟೊತ್ತಿಗೆ ವಿದ್ಯಾರ್ಥಿ ಹಿರೇಹುಸೇನಪ್ಪ ಮೃತಪಟ್ಟಿರುವ ವಿಷಯ ತಿಳಿದು ತಕ್ಷಣವೇ ಹಾಸ್ಟೆಲ್‌ಗೆ ಧಾವಿಸಿದ ಪೊಲೀಸರು ಶವ ಪರಿಶೀಲನೆ ನಡೆಸಿ, ಸಾವಿನ ನಿಖರ ಕಾರಣ ತಿಳಿಯಲು, ಶಹರ ಠಾಣೆ ಪಿಎಸ್‌ಐ ಬಸವರಾಜ ಅವರ ನೇತೃತ್ವದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದು ತಿಳಿದುಬಂದಿರುತ್ತದೆ.


Spread the love

Leave a Reply

Your email address will not be published. Required fields are marked *