ಸಿಂಧನೂರು : ಓಪನ್ ಎಸಿ ಆದ ಮರಗಳ ನೆರಳು !

Spread the love

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 1
ನಗರದಲ್ಲಿ ಬಿಸಿಲಿನ ಕುದಿಯಿಂದಾಗಿ ಜನರು ಹೈರಾಣಾಗುತ್ತಿದ್ದು, ಅಲ್ಲಲ್ಲಿ ಕಾಣಸಿಗುವ ಮರ-ಗಿಡಗಳು ಓಪನ್ ಎಸಿಯಂತಾಗಿವೆ. ಉರಿಬಿಸಿಲಿನಲ್ಲೂ ಎಪಿಎಂಸಿಯ ಆವರಣದಲ್ಲಿ ವಿವಿಧೆಡೆ ಇರುವ ಮರಗಳು ಸಾರ್ವಜನಿಕರಿಗೆ ಹಾಗೂ ಕಾರ್ಮಿಕರ ವಿಶ್ರಾಂತಿಗೆ ಅನುಕೂಲವಾಗಿವೆ. ಎಪಿಎಂಸಿಯ ಶ್ರಮಜೀವಿ ಹಮಾಲರ ಸಂಘದ ಬಳಿ ಒಂದೇ ಕಡೆ ನಾಲ್ಕಾರು ಮರಗಳು ಇದ್ದು ಬಿಸಿಲಲ್ಲೂ ಭರಪೂರ ಚೆಲ್ಲಿವೆ. ಈ ನೆರಳಿಗೆ ಸಾರ್ವಜನಿಕರು ವಿಶ್ರಾಂತಿ ಪಡೆಯುತ್ತಿದ್ದುದು ಬುಧವಾರ ಕಂಡುಬಂತು.

Namma Sindhanuru Click For Breaking & Local News

“ಒಂದೇ ಸಮನೆ ಸುಡು ಬಿಸಿಲಿಗೆ ಮನೆಯ ತಾರಸಿಗಳು ಹೆಂಚಿನಂತಾಗುತ್ತಿವೆ. ರಾತ್ರಿಯಾಗುತ್ತಿದ್ದಂತೆ ಕುದಿ ಹೆಚ್ಚಿ ಎಷ್ಟೇ ಫ್ಯಾನು ಹಾಕಿದರೂ ಬಿಸಿ ಗಾಳಿ ಬರುತ್ತದೆಯೇ ಹೊರತು, ತಂಪು ಅನಿಸುತ್ತಿಲ್ಲ. ಎಸಿ ಹಾಕಿದರೂ ನೆಮ್ಮದಿ ಸಿಗುತ್ತಿಲ್ಲ. ಗಿಡ-ಮರಗಳ ಗಾಳಿಯ ಮುಂದೆ ಯಾವ ಎಸಿ ಇಲ್ಲದಂತಾಗಿದೆ. ಮರದ ನೆರಳು ಕಂಡರೆ ಇಲ್ಲಿಯೇ ಕುಳಿತುಕೊಳ್ಳಬೇಕು ಅನಿಸುತ್ತದೆ” ಎಂದು ಸಾರ್ವಜನಿಕರೊಬ್ಬರು ಹೇಳುತ್ತಾರೆ. ಕೆಲವೊಂದು ಕಡೆ ತೋಪಿನಂತಿರುವ ಬೃಹತ್ ಮರಗಳು ಉರಿಬಿಸಿಲಿನಲ್ಲೂ ತಲೆಎತ್ತಿ ನೆರಳಿನ ದಾಸೋಹ ಮಾಡುತ್ತಿವೆ.
ಬಿಸಿ ಗಾಳಿಯಿಂದ ನಿದ್ರಾಭಂಗ !
ಬೆಳಿಗ್ಗೆ 8 ಗಂಟೆಯಿಂದಲೇ ಬಿಸಿಲು ಚುರುಕು ಮೂಡಿಸುತ್ತಿದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಧಗೆ ಅಂಗಾಲಿನಿಂದ ಹಣ್ಣೆತ್ತಿವರೆಗೆ ಸುಡುತ್ತಿದೆ. ಆ ನಂತರ ರಾತ್ರಿ ಬಿಸಿಗಾಳಿ ನಿದ್ರಾಭಂಗ ಮಾಡುತ್ತಿದೆ. ವಿದ್ಯುತ್ ಕೈಕೊಟ್ಟು ಸ್ವಲ್ಪ ಹೊತ್ತು ಫ್ಯಾನು ತಿರುಗದಂತಾದರೇ ಕುದಿ ಆವರಿಸಿ ಉಸಿರುಗಟ್ಟಿದಂತಹ ಅನುಭವವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಚಿಕ್ಕಮಕ್ಕಳಂತೂ ವಾತಾವರಣದಲ್ಲಿ ಬಿಸಿ ಗಾಳಿಯಿಂದಾಗಿ ಅಳುವುದು, ಚೀರುವುದು ಸಾಮಾನ್ಯವಾಗಿದೆ ಎಂದು ಹಲವರು ಹೇಳುತ್ತಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *